ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ಮೂಡುಬಿದಿರೆ ಇನ್ಸ್ಪೆಕ್ಟರ್ ರವರಿಗೆ ಮನವಿ
ಮೂಡುಬಿದಿರೆ: ತಾಲೂಕಿನಲ್ಲಿ ವಾಹನ ಸಂಚರಾವು ದಿನೇ ದಿನೇ ಜಾಸ್ತಿ ಆಗುತ್ತಿದ್ದು ಮೂಡುಬಿದಿರೆಯ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ ಆಗುತ್ತಿದೆ . ಅದೇ ರೀತಿ ಅಪಘಾತಗಳು ಸಂಭವಿಸುತ್ತಿದ್ದು, ಮೂಡುಬಿದಿರೆ ಮೈಟ್ ಕಾಲೇಜು ನಿಂದ ಜೈನ್ ಪೇಟೆ ವರೆಗೆ ಸ್ಪೀಡ್ ಬ್ರೆಕರ್ ಹಾಗೂ ಮೂಡುಬಿದಿರೆ ತಾಲೂಕಿಗೆ ಪ್ರತ್ಯೇಕ ಟ್ರಾಫಿಕ್ ಕಂಟ್ರೋಲ್ ರೂಮ್ ಸ್ಥಾಪಿಸಲು ನೇತಾಜಿ ಬ್ರಿಗೇಡ್ ಮನವಿ ಸಲ್ಲಿಸಿತು. ಮೂಡುಬಿದಿರೆ ಪೊಲೀಸ್ ಠಾಣಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪದಾಧಿಕಾರಿಗಳಾದ ಅಭಿಷೇಕ್ ಸಾಲ್ಯಾನ್,ಅನಂದ ಕುಲಾಲ್,ಸಂದೇಶ್ ಕುಂದರ್, ಶಿವಾನಂದ , ನಿತ್ಯಾನಂದ ಕುಲಾಲ್ ,ಯಶವಂತ ಮಾಸ್ತಿಕಟ್ಟೆ, ನಿತೇಶ್, ಶಿವಾನಂದ ಕೋಡಂಗಲ್ಲು,ನಿತ್ಯಾನಂದ, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು